ಕುಷ್ಟಗಿ:- ತಾಲೂಕಿನ ಗಂಗನಾಳ ಗ್ರಾಮದ ಹನಮಂತ ಮತ್ತು ಗೌರಮ್ಮ ಕಲಭಾವಿ ಅವರ ಸುಪುತ್ರ ಸಂತೋಷ ಕಲಭಾವಿ ಎಂಬ ವಿದ್ಯಾರ್ಥಿ ವಿಜಯನಗರ ಜಿಲ್ಲೆಯ ಹಗರಿ ಬೊಮ್ಮನಹಳ್ಳಿ ತಾಲೂಕಿನ ಕೊಟ್ಟೂರು ಕಾಲೇಜಿನಲ್ಲಿ ಕಳೆದ ಎರಡು ವರ್ಷದಿಂದ ವಿದ್ಯಾಭ್ಯಾಸ ಮಾಡುತ್ತಿದ್ದು ನಿನ್ನೆ ಪ್ರಕಟವಾದ ಫಲಿತಾಂಶದಲ್ಲಿ ಶೇಕಡಾ 98.36% ಅಂಕ ಗಳಿಸಿ ಮುಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾನೆ. ಮೂಲತ ಇವರ ತಂದೆ ಆಟೋ ಚಾಲಕರಾಗಿದ್ದು ಅದರಿಂದ ಬರುವ ಹಣದಲ್ಲಿ ಮಗನಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕೆಂಬ ಆಶೆಇಟ್ಟುಕೊಂಡ ಹಿನ್ನೆಲೆಯಲ್ಲಿ ನಿನ್ನೆಯ ಮಗನ ಫಲಿತಾಂಶ ದಿಂದ ಬಹಳ ಸಂತೋಷವನ್ನುಂಟುಮಾಡಿದೆ ಎಂದು ಕುಟುಂಬದವರು ಹೇಳಿದ್ದಾರೆ.ಗಂಗನಾಳ ಗ್ರಾಮದ ಗುರು ಹಿರಿಯರು ಸಹಪಾಠಿಗಳು ಈ ವಿದ್ಯಾರ್ಥಿಯ ಮನೆಗೆ ಆಗಿಮಿಸಿ ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಿದ್ದಾರೆ.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ